An anonymous letter sent by jail personnel to ADGP Megharik has thrown more light on corruption in Parappana Agrahara. It says apart from Sasikala Natarajan many high profile jail inmates have been receiving special facilities. Will Siddaramaiah take action?
ಬೆಂಗಳೂರಿನಲ್ಲಿರುವ ಕುಪ್ರಸಿದ್ಧ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿರುವ, ನಡೆಯುತ್ತಿರುವ ಭ್ರಷ್ಟಾಚಾರದ ಪ್ರಕರಣ ಇದೀಗ ಮತ್ತೊಂದು ರೋಚಕ ತಿರುವನ್ನು ಪಡೆಯುವ ಹಂತಕ್ಕೆ ತಲುಪಿದೆ. ಪರಪ್ಪನ ಅಗ್ರಹಾರದಲ್ಲಿರುವ ಅನಾಮಧೇಯ ಸಿಬ್ಬಂದಿಯೊಬ್ಬರು ಎಡಿಜಿಪಿ ಮೇಘರಿಕ್ ಅವರಿಗೆ ಪತ್ರವೊಂದನ್ನು ಬರೆದಿದ್ದು, ಶಶಿಕಲಾ ನಟರಾಜನ್ ಮಾತ್ರವಲ್ಲ, ಇನ್ನೂ ಹಲವಾರು ಕುಖ್ಯಾತ ಕ್ರಿಮಿನಲ್ ಗಳು ಜೈಲಿನಲ್ಲಿ ಬಿಂದಾಸ್ ಆಗಿ ರಾಜಾತಿಥ್ಯ ಪಡೆದುಕೊಳ್ಳುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.