ಹುಬ್ಬಳ್ಳಿಯ ಹೊರವಲಯದ ತಾರಿಹಾಳ ಕೈಗಾರಿಕ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ದುರಂಕ್ಕೆ ಮೊದಲ ಬಲಿ ಆಗಿದೆ. ಸುಟ್ಟ ಗಾಯಗಳಿಂದ ಗಂಭೀರ ಗಾಯಗೊಂಡಿದ್ದ ಗದಗ ಮೂಲದ ವಿಜಯಲಕ್ಷ್ಮಿ ವೀರಭದ್ರಪ್ಪ ಯಚ್ಚನಾಗರ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ 8 ಕಾರ್ಮಿಕರಾದ ಚನ್ನವ್ವ, ಪ್ರೇಮಾ, ಮಾಳೇಶ, ನನ್ನಿಮಾ, ಮಲ್ಲಿಕಾರ್ಜುನ, ನಿರ್ಮಲಾ, ಗೌರವ್ವ ಎಂಬುವರಿಗೆ ಚಿಕಿತ್ಸೆ ಮುಂದುವರೆದಿದೆ. ಆದರೆ. ಶೇ.80ರಷ್ಟು ಸುಟ್ಟು ಗಂಭೀರವಾಗಿದ್ದು ಇವರ ಜೀವಕ್ಕೂ ಗ್ಯಾರಂಟಿ ಇಲ್ಲದಾಗಿದೆ. ಅವಘಡಕ್ಕೆ ಫ್ಯಾಕ್ಟರಿ ಮಾಲೀಕ ತಬ್ಸಿಮ್ ಅಬ್ದುಲ್ ಶೇಕ್ ನಿರ್ಲಕ್ಷ್ಯವೇ ಕಾರಣವಾಗಿದ್ದು.. ಯಾವುದೇ ಅನುಮತಿ ಪಡೆದಿರಲಿಲ್ಲ.. ಸದ್ಯ ಘಟನೆ ಬಳಿಕ ಮಾಲೀಕ ತಲೆಮರೆಸಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಶಾಸಕರಾದ ಅರವಿಂದ್ ಬೆಲ್ಲದ್, ಪ್ರಸಾದ್ ಅಬ್ಬಯ್ಯ, ಡಿಸಿ ಗುರುದತ್ ಹೆಗಡೆ, ಪೊಲೀಸ್ ಕಮಿಷನರ್ ಲಾಭೂರಾಮ್,ಎಸ್ಪಿ ಲೋಕೇಶ್, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಅವಘಡ ಬಗ್ಗೆ ಮಾಹಿತಿ ಪಡೆದರು. ಹಾಗೆ ಸಚಿವ ಶಂಕರ್ ಮುನ್ನೆನಕೊಪ್ಪ ಕಿಮ್ಸ್ ಆಸ್ಪತ್ರೆಗೆ ಭೇಟಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ರು.
#publictv #newscafe